ಯಾರೀ ದಿಟ್ಟ ಫಕೀರ?

ನೂರು ಬಣ್ಣದಲಿ ಊರು ನಗುತಿರಲು
ಗಿರಿಯ ತಪ್ಪಲಲ್ಲಿ
ಬಾಳಿನ ಚೆಲುವನು ಹಸಿರು ಬರೆದಿರಲು
ಬೆಟ್ಟದ ಮೈಯಲ್ಲಿ
ಕೈಯ ಬೀಸಿ ಕರೆಯುತ್ತಿರೆ ಜೀವನ
ಸಾವಿರ ಕೈಗಳಲಿ
ಕಣವೂ ಚಲಿಸದೆ ಕಣ್ಣೇ ಹರಿಸದೆ
ಕುಳಿತನಲ್ಲ ವೀರ
ಯಾರೀ ದಿಟ್ಟ ಫಕೀರ?

ಮಿಂಚು ಸಿಡಿಲು ಮಳೆಗಾಳಿಯ ಜೋರಿಗೆ
ಭೂಮಿಯೆ ನಡುಗಿರಲು
ಮೈಯ ಕೊರೆದು ಚಳಿ ಬಾರಿಸಿ ಬಾಯಿಗೆ
ಪ್ರಾಣವೆ ಹೊಮ್ಮಿರಲು
ಬಾನಿನ ಕುಲುಮೆ ಉರಿಧಗೆ ಕಾರಿ
ಕಲ್ಲೇ ಸಿಡಿದಿರಲು
ತನ್ನೊಳಗನ್ನು ಚಿಂತಿಸುತಲ್ಲೇ
ಕುಳಿತನಲ್ಲ ವೀರ
ಯಾರೀ ದಿಟ್ಟ ಫಕೀರ?

ಶತಶತಮಾನ ಸಹಸ್ರಮುನಿಜನ
ಬಂದು ನಿಂತ ನೆಲೆಗೆ
ದಿನ ದಿನ ಸಾಧನೆ, ಆತ್ಮನಿವೇದನೆ
ನಡೆದ ಅರುಣಗಿರಿಗೆ
ಸಿದ್ಧರ ಬುದ್ಧರ ಅತ್ಮ ಪ್ರಬುದ್ಧರ
ಬೆಳೆದ ತಪದ ನೆಲೆಗೆ
ಮೆಚ್ಚಿ ಸ್ವರ್ಗವೇ ಇಟ್ಟ ಕಿರೀಟ
ಎನಿಸಿ ಕುಳಿತ ವೀರ!
ಯಾರೀ ದಿಟ್ಟ ಫಕೀರ?

ಗೇಣುದ್ದದ ಕೌಪೀನವನುಳಿದು
ಏನೂ ಇರದವನು
ಬಯಸಿದ ಜೀವಕೆ ಮೋಕ್ಷದರಿವನೇ
ಮೌನದಿ ಕೊಡುವವನು
ಹೊಳೆಯುವ ಕಣಿನ ಮಣಿಗಳ ತೂರಿ
ಹೊಮ್ಮುವಾತ್ಮನಿವನು
ನಭದ ತಾರೆಗಳ ರತ್ನಮಾಲೆಗಳ
ಹಾರ ತಳೆದ ವೀರ
ಯಾರೀ ದಿಟ್ಟ ಫಕೀರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಸಬರಿಗೆ
Next post ಜಿರಲೆ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys